ಈ ವಾರ ತೆರೆಗೆ ‘ಶಿವಾಜಿನಗರ’

  • IndiaGlitz, [Monday,February 24 2014]

ಗುರುವಾರ ಶಿವರಾತ್ರಿ ಹಬ್ಬದ ದಿನ ಫೆಬ್ರವರಿ 27ರಂದು ಹೆಸರಾಂತ ನಿರ್ಮಾಪಕ ರಾಮು ಅವರ ‘ಶಿವರಾತ್ರಿ’ ಸಾಹಸ ಚಿತ್ರಗಳಿಗೆ ಹೆಸರಾದ ವಿಜಯ್ ಹಾಗೂ ಪರುಲ್ ಯಾದವ್ ಅಭಿನಯದ ಪಿ ಎನ್ ಸತ್ಯ ನಿರ್ದೇಶನದ ಚಿತ್ರ ಬಿಡುಗಡೆ ಆಗುತ್ತಿದೆ.

‘ಶಿವಾಜಿನಗರ’ ಕನ್ನಡ ಸಿನೆಮಾ ನಿರ್ಮಾಪಕ ರಾಮು ಅವರ ಮತ್ತೊಂದು ಅದ್ದೂರಿ ಕೊಡುಗೆ.ರಾಮು ಫಿಲ್ಮ್ ಅವರ ‘ಶಿವಾಜಿನಗರ’ ಪಿ ಎನ್ ಸತ್ಯ ಅವರ ನಿರ್ದೇಶನದಲ್ಲಿ ತಯಾರಾಗಿದೆ. ಅಂದು ‘ಕಲಾಸಿಪಾಳ್ಯ’ 2005 ರಲ್ಲಿ ರಾಮು ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡಿ ಇಂದು ಅದೇ ಲಾಂಛನದಲ್ಲಿ ‘ಶಿವಾಜಿನಗರ’. ಪಿ ಎನ್ ಸತ್ಯ ಈ ಹಿಂದೆ ನಿರ್ಮಾಪಕ ರಾಮು ಅವರ ಸಂಸ್ಥೆಯಲ್ಲಿ ‘ಘೂಳಿ’ ನಿರ್ದೇಶನ ಮಾಡಿದ್ದರು.

ನಾಯಕ ನಟ ವಿಜಯ್ ‘ಕಂಠೀರವ’ ಸಿನೆಮಾದಲ್ಲಿ ಇದೆ ನಿರ್ಮಾಪಕರ ಸಂಸ್ಥೆಯಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಜಾಸ್ಸಿ ಗಿಫ್ಟ್ ಅವರ ಸಂಗೀತ, ಸೆಲ್ವಮ್ ಅವರ ಛಾಯಾಗ್ರಹಣ, ರವಿ ಶ್ರೀವತ್ಸ ಅವರ ಸಂಭಾಷಣೆ, ವಿಜಯ್ ಚಂಡೂರ್ ಅವರ ಸಹಾಯಕ ನಿರ್ದೇಶನ ರಾಮ್ ಲಕ್ಷ್ಮಣ್, ರವಿ ವರ್ಮ, ಗಣೇಶ್ ಹಾಗೂ ಫಳಣಿ ರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

ವಿಜಯ್ ಅವರಿಗೆ ನಾಯಕಿ ಆಗಿ ಪರೂಲ್ ಯಾದವ್ ಅವರು ಇದ್ದಾರೆ. ಪ್ರದೀಪ್ ರಾವತ್, ಅಭಿಮನ್ ಸಿಂಗ್, ಆದಿತ್ಯ ಮೆನನ್, ಸುಮಿತ್ರಾ, ಅವಿನಾಷ್, ಸತ್ಯಜಿತ್, ಹುಳಿವಾನ್ ಗಂಗಾಧರ, ಶ್ರೀ ನಿವಾಸ್ ಪ್ರಭು, ಮೈಸೂರು ಮಲ್ಲೇಶ್, ಅಡಿಗ, ಅಶೋಕ್ ರಾವು ಅಲ್ಲದೆ 20 ವರ್ಷಗಳ ಬಳಿಕ ಅಂದಿನ ನಾಯಕಿ ತ್ರಿವೇಣಿ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.